ಸಾಫ್ಟ್ವೇರ್ ಎಂಜಿನಿಯರ್ ಸೈಯದ್ ಸಲ್ಮಾನ್ ಎಂಬುವರು ನೀಡಿದ್ದ ದೂರಿನನ್ವಯ ಜೆ.ಪಿ.ನಗರ ಪೊಲೀಸರು, ಮಂಜುನಾಥ್ ರೆಡ್ಡಿ ಹಾಗೂ ಅವರ ಬೆಂಬಲಿಗರಾದ ತೇಜಸ್, ರಾಮರೆಡ್ಡಿ, ಯಶವಂತ, ಸಂತೋಷ್, ಲಕ್ಷ್ಮಿನಾರಾಯಣ, ಹರೀಶ್ ಹಾಗೂ ಶಶಿಕುಮಾರ್ ಅವರನ್ನು ಬಂಧಿಸಿ ಬುಧವಾರ ರಾತ್ರಿ ನ್ಯಾಯಾಲಯದ ಎದುರು ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.