ಇಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ಅವರು ಈ ಆರೋಪ ಮಾಡಿದರು. ‘ಶ್ರೀಮಾನ್ ಮಣಿಶಂಕರ್ ಅಯ್ಯರ್... ಏನು ಮಾಡಿದ್ದರು ಎಂಬುದು ನಿಮಗೆ ಗೊತ್ತೆ’ ಎಂದು ಪ್ರಧಾನಿ ಸಾರ್ವಜನಿಕರನ್ನು ಪ್ರಶ್ನಿಸಿ ಮಾತು ಆರಂಭಿಸಿದರು. ‘ಅಯ್ಯರ್ ನನ್ನ ಬಗ್ಗೆ ಹೇಗೆಲ್ಲಾ ಕೆಟ್ಟದಾಗಿ ಮಾತನಾಡಿದ್ದಾರೆ ಗೊತ್ತಾ? ಅವರು ಬೈದದ್ದು ನನ್ನನ್ನಾ ಅಥವಾ ಗುಜರಾತನ್ನಾ ಅಥವಾ ಸುಸಂಸ್ಕೃತ ಭಾರತೀಯ ಸಮಾಜವನ್ನಾ? ಅವರ ಬೈಗುಳಗಳ ಬಗ್ಗೆ ಮಾತನಾಡುವುದು ಬೇಡ. ಡಿಸೆಂಬರ್ 18ರ ಫಲಿತಾಂಶದ ಮೂಲಕ ಗುಜರಾತಿಗರು ಆ ಬೈಗುಳಗಳಿಗೆ ಉತ್ತರ ನೀಡಲಿದ್ದಾರೆ’ ಎಂದು ಮೋದಿ ಹೇಳಿದರು.