ವಿಜಯಪುರ ತಾಲ್ಲೂಕು ಬಬಲೇಶ್ವರದಲ್ಲಿ ಈಚೆಗೆ ನಡೆದ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ರ್ಯಾಲಿಯಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ, ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಪರಿಯಿದು.
‘ಸಮಾವೇಶದಲ್ಲಿ ಬಿಜೆಪಿ ಮುಖಂಡರ ಭಾಷಣ ರೆಕಾರ್ಡ್ ಮಾಡಿಸುತ್ತೇನೆ ಎಂದು ಎಂ.ಬಿ. ಗೌಡ್ರು ಹೇಳಿಕೆ ನೀಡಿದ್ದಾರೆ. ಇಂಥ ಬೆದರಿಕೆಗೆ ಬಗ್ಗೋರು ನಾವಲ್ಲ. ರೆಕಾರ್ಡ್ ಮಾಡಿಸಿ, ಬೇಕಂದ್ರೆ ಸಿ.ಸಿ.ಟಿವಿ ಕ್ಯಾಮೆರಾ ಇಟ್ಟು ನೋಡ್ಕೊಳ್ಳಿ ಗೌಡ್ರೇ’ ಎಂದು ಸವದಿ ಕಿಚಾಯಿಸುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರ ಪಡೆ ಶಿಳ್ಳೆಗಳ ಸುರಿಮಳೆಗೈದಿತು.
‘ಓ ಓ... ಗೌಡ್ರು ಸಿ.ಸಿ. ಕ್ಯಾಮೆರಾನೂ ಕೂರಿಸಿದ್ದಾರಂತೆ. ಇದಕ್ಕೆಲ್ಲ ನೀವ್ ತಲೆಕೆಡಿಸಿಕೊಳ್ಳಬೇಡಿ. ಯಾರೂ ಯಾರನ್ನೂ ಏನೂ ಮಾಡಕ್ಕಾಗಲ್ಲ. ನೀವು ಧೈರ್ಯದಿಂದ ನಿಮ್ಮ ಕೈಗಳನ್ನೆತ್ತಿ ನಮಗೆ ಬೆಂಬಲ ಸೂಚಿಸಿ.