ಹಂಬನ್ತೋಟ ಬಂದರನ್ನು ಚೀನಾಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಮತ್ತು ಶ್ರೀಲಂಕಾದಲ್ಲಿ ನೌಕಾ ಪಡೆಯನ್ನು ನಿಯೋಜಿಸಿರುವ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿತ್ತು. ಇದರಿಂದ ಭದ್ರತೆಗೆ ಧಕ್ಕೆಯಾಗಬಹುದು ಎಂದು ಭಾರತ ಅಭಿಪ್ರಾಯಪಟ್ಟಿತ್ತು. ಆದರೆ, ಈ ಬಂದರನ್ನು ಯಾವುದೇ ಕಾರಣಕ್ಕೂ ಸೇನಾ ನೆಲೆಯಾಗಿ ಪರಿವರ್ತಿಸಲು ಯಾವದೇ ದೇಶಕ್ಕೂ ಅವಕಾಶ ನೀಡುವುದಿಲ್ಲ ಎಂದು ವಿಕ್ರಂಸಿಂಘೆ ಭಾರತಕ್ಕೆ ತಿಳಿಸಿದ್ದಾರೆ.