ಮನೆ ಮನೆಗೆ ಉಚಿತ ನೀರಿನ ಕ್ಯಾನ್ಗಳನ್ನು ವಿತರಿಸಿ ಮಾತನಾಡಿದ ಜಮೀನು ದಾನಿ ಆರ್.ಲಕ್ಷ್ಮಯ್ಯ, ‘ಈ ಭಾಗದಲ್ಲಿ ನೀರಿನ ಅಭಾವದಿಂದ ಜನರು ಪರಿತಪಿಸುತ್ತಿದ್ದರು. ಶಾಸಕರು ಅಗತ್ಯ ಅನುದಾನ ಒದಗಿಸಿದ್ದರಿಂದ ಕುಡಿಯುವ ನೀರು ಒದಗಿಸುವ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ’ ಎಂದರು.
ಶ್ರೀನಿವಾಸಪುರ ಹಾಲು ಉತ್ಪಾದಕ ಸಹಕಾರ ಸಂಘ ಅಧ್ಯಕ್ಷ ಕೆ.ಆರ್.ಗೋವಿಂದರಾಜು, ‘ಅಭಿವೃದ್ಧಿ ಕೆಲಸ ಮಾಡುವ, ಜನರ ಮಧ್ಯೆ ಕೆಲಸ ಮಾಡುವ ಜನಪ್ರತಿನಿಧಿಗಳಿಂದ ಮಾತ್ರ ಗ್ರಾಮ, ಪಟ್ಟಣ ಅಭಿವೃದ್ಧಿ ಸಾಧ್ಯ’ ಎಂದರು.