ಲಖನೌ: ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್ಯು) ಎಂ.ಎ ಕೋರ್ಸ್ನ (ಮಧ್ಯಕಾಲೀನ ಇತಿಹಾಸ) ಪರೀಕ್ಷೆಯಲ್ಲಿ ತ್ರಿವಳಿ ತಲಾಖ್ ಮತ್ತು ನಿಖಾ ಹಲಾಲಾ ಕುರಿತಾಗಿ ಪ್ರಶ್ನೆ ಕೇಳಿರುವುದನ್ನು ಕೆಲವು ಮುಸ್ಲಿಂ ಮೌಲ್ವಿಗಳು ಆಕ್ಷೇಪಿಸಿದ್ದಾರೆ.
ಪರೀಕ್ಷೆಯಲ್ಲಿ, ‘ತ್ರಿವಳಿ ತಲಾಖ್ ಮತ್ತು ನಿಖಾ ಹಲಾಲಾಗಳು ಸಾಮಾಜಿಕ ಅನಿಷ್ಟಗಳು– ವಿವರಿಸಿ’ ಎಂಬ ಪ್ರಶ್ನೆ ಕೇಳಿರುವುದು ಮೌಲ್ವಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಪ್ರಶ್ನೆ ಕೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ವಿಶ್ವವಿದ್ಯಾಲಯದ ಆಡಳಿತ ಹೇಳಿದೆ.
ಆದರೆ, ಇಂತಹ ಪ್ರಶ್ನೆಗಳು ಸಮಾಜವನ್ನು ಒಡೆಯುವುದರಿಂದ ಅವುಗಳನ್ನು ಬಿಟ್ಟುಬಿಡಬೇಕು ಎಂದು ಮೌಲ್ವಿಗಳು ಹೇಳಿದ್ದಾರೆ.