ಫಾದರ್ ಮುನ್ಸಿಂಜರ್ ಲೂಸಿಯೋ ಮಸ್ಕರೇನಸ್ ಮಾತನಾಡಿ, ‘ಜಿಲ್ಲೆಯ ಕ್ಯಾಥೋಲಿಕ್ ಸಮುದಾಯದವರಿಗೆ ಸ್ಮಶಾನವಿಲ್ಲದೇ ಶವವನ್ನು ಹುಬ್ಬಳ್ಳಿ ಅಥವಾ ಹರಿಹರಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ಆದರೆ, ಈಗ ಅಲ್ಲಿ ಅವಕಾಶ ನೀಡುತ್ತಿಲ್ಲ. ಆದ್ದರಿಂದ, ಜಿಲ್ಲೆಯಲ್ಲಿಯೇ ನಮಗೆ ಸ್ಮಶಾನಕ್ಕೆ ಜಾಗ ನೀಡಬೇಕು’ ಎಂದು ಮನವಿ ಮಾಡಿದರು.