’ಬೈಕ್ ಸವಾರನ ಗಮನ ಬೇರೆಡೆ ಹೋಗುವುದು ರಸ್ತೆ ಅಪಘಾತಕ್ಕೆ ಪ್ರಮುಖ ಕಾರಣ. ವರ್ಷದಲ್ಲಿ 12 ಬಾರಿ ಪೂರ್ಣ ಚಂದ್ರ ಕಾಣಿಸುತ್ತಾನೆ. ಈ ಅವಧಿಯಲ್ಲಿ (ಹುಣ್ಣಿಮೆಗೆ ಒಂದು ವಾರ ಮೊದಲು ಮತ್ತು ಒಂದು ವಾರ ನಂತರ) ಚಂದ್ರ ದೊಡ್ಡದಾಗಿ ಕಾಣಿಸುವುದರಿಂದ ಹೆಚ್ಚು ಬೆಳಕು ಇರುತ್ತದೆ. ಹೀಗಾಗಿ ಬೈಕ್ ಸವಾರರ ಗಮನ ಬೇರೆಡೆ ಹರಿಯುವ ಸಂಭವವಿರುತ್ತದೆ’ ಎಂದಿದ್ದಾರೆ. ಹುಣ್ಣಿಮೆ ದಿನ ಸಂಭವಿಸಿದ ಅಪಘಾತಗಳ ದತ್ತಾಂಶ ಹಾಗೂ ಇತರ ದಿನ ನಡೆದ ಅಪಘಾತಗಳ ದತ್ತಾಂಶಗಳನ್ನು ಹೋಲಿಸಿ, ಈ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.