ನಿವೃತ್ತ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಮಾತನಾಡಿ, ‘ಶ್ರೀಮಂತಿಕೆ, ಅಧಿಕಾರವನ್ನು ಗೌರವಿಸುವ ಈ ಸಮಾಜದಲ್ಲಿ ರೈತರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ರೈತರು ಬೆಳೆಗಾಗಿ ಸಾಲ ಪಡೆದು ಮದುವೆಯಂತಹ ಸಮಾರಂಭಗಳಿಗೆ ವೆಚ್ಚ ಮಾಡಬಾರದು. ರೈತರಿಗೆ ಬೆಳೆ ನಷ್ಟವಾದ ಸಂದರ್ಭದಲ್ಲಿ ಸರ್ಕಾರ ರೈತರಿಗೆ ನಷ್ಟ ಪರಿಹಾರ ನೀಡಬೇಕು. ಮಧ್ಯವರ್ತಿಗಳಿಂದ ರೈತರಿಗೆ ವಂಚನೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.