‘ಹೊನ್ನಾವರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಕಾರ್ಯಕ್ರಮ ನಿಮಿತ್ತ ಭೇಟಿ ನೀಡಿದ ದಿನವೇ ಪರೇಶ ಮೇಸ್ತ ಅವರ ಕೊಲೆ ನಡೆದಿತ್ತು. ಆದರೆ, ಪ್ರಕರಣ ಮುಚ್ಚಿಟ್ಟು ಮುಖ್ಯಮಂತ್ರಿ ಕಾರ್ಯಕ್ರಮ ಮುಗಿಸಿದ್ದರು. ಹೊನ್ನಾವರ ಬಿಟ್ಟು ಹೋದ ನಂತರ ಈ ವಿಷಯ ಬಹಿರಂಗಗೊಳಿಸಿದ್ದರು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಲಿ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.