ದೊಡ್ಡಬಳ್ಳಾಪುರ: ತಾಲ್ಲೂಕಿನ ಐತಿಹಾಸಿಕ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದನಗಳ ಜಾತ್ರೆಗೆ ಸಿದ್ಧತೆಗಳು ಪ್ರಾರಂಭವಾಗಿದ್ದು ಎತ್ತುಗಳನ್ನು ಕಟ್ಟಲು ರೈತರು ಪೆಂಡಾಲ್ ಹಾಕುತ್ತಿದ್ದಾರೆ.
ಜಾತ್ರೆಗೆ ಬರುವ ಜನ, ಜಾನುವಾರುಗಳಿಗೆ ಅಗತ್ಯ ಇರುವ ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ ಸೇರಿದಂತೆ ಇತರೆ ಮೂಲಸೌಲಭ್ಯಗಳನ್ನು ಕಲ್ಪಿಸಲು ದೇವಾಲಯ ಸಮಿತಿ ಈಗಾಗಲೇ ಸಿದ್ಧತೆಗಳನ್ನು ನಡೆಸಿದೆ.
ಜಾತ್ರೆಗೆ ಎತ್ತುಗಳು ಬರಲು ಆರಂಭವಾಗಿದ್ದು ತುಂಬು ಜಾತ್ರೆಗೆ ಇನ್ನು ಮೂರು ದಿನ ಬೇಕಾಗಲಿದೆ ಎನ್ನುತ್ತಾರೆ ಎತ್ತುಗಳೊಂದಿಗೆ ಜಾತ್ರೆಗೆ ಬಂದಿರುವ ತಾಲ್ಲೂಕಿನ ಸಾಸಲು ಹೋಬಳಿಯ ರೈತರು. ಡಿ.24ರಂದು ಬೆಳಿಗ್ಗೆ 11ಕ್ಕೆ ಘಾಟಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದೆ.