ಹೇಮಂತ್ ಅವರು ಆದಾಯವನ್ನು ಮೀರಿ ಆಸ್ತಿ ಸಂಪಾದಿಸಿದ್ದಾರೆ ಎನ್ನುವ ದೂರಿನ ಜಾಡು ಹಿಡಿದು ಎಸಿಬಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ರಾಮನಗರ ಎಸಿಬಿ ಡಿವೈಎಸ್ಪಿ ಚಂದ್ರಶೇಖರ್, ಕೋಲಾರ ಡಿವೈಎಸ್ಪಿ ಮೋಹನ್, ಚಿಕ್ಕಬಳ್ಳಾಪುರ ಇನ್ಸ್ಪೆಕ್ಟರ್ ಲಕ್ಷ್ಮೀದೇವಿ , ರಾಮನಗರದ ಗೌತಮ್, ಪ್ರಕಾಶ್, ಬೆಂಗಳೂರಿನ ಇನ್ಸ್ಪೆಕ್ಟರ್ಗಳಾದ ಕುಮಾರಸ್ವಾಮಿ, ಹಾಲಪ್ಪ ಅವರು ಸೇರಿದಂತೆ ಸುಮಾರು 25 ಅಧಿಕಾರಿಗಳು ಈ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.