ಅಂಕೋಲಾ: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಇತ್ತೀಚಿಗೆ ನಡೆದ ಗಲಭೆ ಹಿನ್ನೆಲೆಯಲ್ಲಿ ಶಾಂತಿ ಪಾಲನೆ ಮತ್ತು ಕಾನೂನು ಸುವ್ಯವಸ್ಥೆ ಕುರಿತು ನಾಗರಿಕರಲ್ಲಿ ಭರವಸೆ ಮೂಡಿಸುವ ಉಪಕ್ರಮವಾಗಿ ಬುಧವಾರ ಸಂಜೆ ಪಟ್ಟಣದಲ್ಲಿ ಪೊಲೀಸ್ ಸಿಬ್ಬಂದಿ ಪಥ ಸಂಚಲನ ನಡೆಸಿದರು.
ಸಿ.ಪಿ.ಐ. ಬಸಪ್ಪ ಬುರ್ಲಿ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ವೀಣಾ ಹೊನ್ನಿ ಪಥಸಂಚಲನದ ನೇತೃತ್ವ ವಹಿಸಿದ್ದರು. ಪೊಲೀಸ್ ಠಾಣೆ ಎದುರಿನ ವೃತ್ತದಿಂದ ಹೊರಟ ಪಥಸಂಚಲನವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಂಡಿಬಝಾರ, ಕಿತ್ತೂರು ಚನ್ನಮ್ಮ ರಸ್ತೆ ಮುಂತಾದ ಕಡೆಗೆ ಹಾಯ್ದು ಸಂಪನ್ನಗೊಂಡಿತು.