ಚಂದ್ರಪುಲ್ಲ ರೆಡ್ಡಿ ಪೊರು ಬಟ ಗುಂಪಿಗೆ ಸೇರಿದ ಈ ಮಾವೋವಾದಿಗಳ ಮೇಲೆ ಕೊಲೆ, ಸುಲಿಗೆ ಮತ್ತು ಬೆದರಿಕೆ ಪ್ರಕರಣಗಳು ದಾಖಲಾಗಿದ್ದವು. ಮೃತರಲ್ಲಿ ಈಶಂ ನರೇಶ್, ಎಂ.ಸಮೈಹ, ಸಂಜೀವ್, ನರಸಿಂಹ ಮತ್ತು ಅಮರ್ ಎಂಬ ಐವರನ್ನು ಗುರುತಿಸಲಾಗಿದೆ. ಈ ಮೊದಲು ಇವರು ಆಂಧ್ರ–ಒಡಿಸ್ಸಾ ಗಡಿಯಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಇವರ ಚಟುವಟಿಕೆಗಳು ಖಮ್ಮಂ–ವಾರಂಗಲ್ ಜಿಲ್ಲೆಗಳಿಗೂ ವಿಸ್ತರಿಸಿದ್ದವು ಎಂದು ತಿಳಿದು ಬಂದಿದೆ.