ಯೋಗಿ ಆದಿತ್ಯನಾಥ ಪ್ರಭಾವ: ವಾರ್ಷಿಕ ಐಎಎಸ್ ಸಪ್ತಾಹದಲ್ಲಿ ಮಾಂಸಾಹಾರಕ್ಕೆ ಕತ್ತರಿ!

ಲಖನೌ: ಉತ್ತರ ಪ್ರದೇಶದ ರಾಜಧಾನಿಯಲ್ಲಿ ನಡೆಯುತ್ತಿರುವ ವಾರ್ಷಿಕ ಐಎಎಸ್ ಸಪ್ತಾಹದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಸಸ್ಯಾಹಾರ ಮಾತ್ರ ಉಣಬಡಿಸಲಾಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಸಸ್ಯಾಹಾರಿ ಆಗಿರುವುದರಿಂದ ಮತ್ತು ಜನರ ಬೇಕು ಬೇಡಗಳನ್ನು ಮನಗಂಡು ಈ ಮೆನು ಸಿದ್ಧಪಡಿಸಲಾಗಿದೆ.
ಗುರುವಾರ ಆರಂಭವಾದ ಈ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿ ಮೆನುವಿನಲ್ಲಿ ಮೀನು, ಮಾಂಸ, ಕೋಳಿ ಪದಾರ್ಥವನ್ನು ಕೈ ಬಿಡಲಾಗಿದೆ.
ಕಳೆದ ವರ್ಷ ರಾಜ್ಯಪಾಲರಾದ ರಾಮ್ ನಾಯಕ್ ಅವರು ಆತಿಥೇಯರಾಗಿದ್ದ ಈ ಕಾರ್ಯಕ್ರಮದಲ್ಲಿ ಅವಧ್ನ ಮಾಂಸಾಹಾರ ಖಾದ್ಯಗಳ ಭೋಜನ ಏರ್ಪಡಿಸಲಾಗಿತ್ತು. ಆದರೆ ಈ ಬಾರಿ ಬರೀ ಸಸ್ಯಾಹಾರವಷ್ಟೇ ಎಂದು ಅಲ್ಲಿನ ಪ್ರತಿನಿಧಿಗಳು ಬೇಸರ ವ್ಯಕ್ತಪಡಿಸಿರುವುದಾಗಿ ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.