ನಗರದ ಎಚ್ಆರ್ಬಿಆರ್ ಬಡಾವಣೆಯ 1ನೇ ಹಂತದ 9ನೇ ‘ಸಿ’ ಮುಖ್ಯರಸ್ತೆಯಲ್ಲಿರುವ ಭಾರತೀ ತೀರ್ಥ ಸಭಾ ಮಂಟಪದಲ್ಲಿ ಇದೇ 17ರಿಂದ ಜನವರಿ 14ರವರೆಗೆ ‘ಮಾರ್ಗಶೀರ್ಷೋತ್ಸವ’ವನ್ನು ಹಮ್ಮಿಕೊಳ್ಳಲಾಗಿದೆ. 17ರಂದು ಸಂಜೆ 5.30ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಂದು ಜಲೋಟ ಹಾಗೂ ಅವರ ತಂಡದಿಂದ ಸಂಗೀತ ಕಛೇರಿ ನಡೆಯಲಿದೆ.