‘ಹೆದ್ದಾರಿ ಅಕ್ಕಪಕ್ಕದಲಿಯೇ ವಾಣಿಜ್ಯ ಮಳಿಗೆ, ವಸತಿಗೃಹ, ಬಾರ್ ಹಾಗೂ ರೆಸ್ಟೋರೆಂಟ್ಗಳನ್ನು ಪ್ರಭಾವಿ ರಾಜಕೀಯ ವ್ಯಕ್ತಿಗಳು ಸ್ಥಾಪಿಸಿದ್ದಾರೆ. ವಾಹನ ನಿಲುಗಡೆಯ ಸ್ಥಳದಲ್ಲಿ ಮಳಿಗೆ ಯನ್ನು ನಿರ್ಮಿಸಿದ್ದರಿಂದ ರಸ್ತೆಯ ಮೇಲೆ ವಾಹನವನ್ನು ನಿಲ್ಲಿಸುತ್ತಾರೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲವೇ? ಬಡವರಿಗೆ ಒಂದು ನ್ಯಾಯ; ಶ್ರೀಮಂತರಿಗೆ ಇನ್ನೊಂದು ನ್ಯಾಯವನ್ನು ಅಧಿಕಾರಿಗಳು ಚಲಾಯಿಸುತ್ತಿರುವುದು ಸರಿಯಲ್ಲ’ ಎಂದು ಸಿಪಿಐ (ಎಂ) ಮುಖಂಡ ಮಲ್ಲಯ್ಯ ದೋರನಹಳ್ಳಿ ಆರೋಪಿಸಿದ್ದಾರೆ.