ಜೆ.ಎಚ್.ಪಟೇಲರು ಮುಖ್ಯಮಂತ್ರಿ ಆಗಿದ್ದಾಗ ಅವರನ್ನು ಒಬ್ಬರು ಕೇಳಿದರು, ‘ನೀವು ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ ಹಾಗೂ ಬೊಮ್ಮಾಯಿ ಅವರಲ್ಲಿ ಯಾರ ಗುಂಪಿಗೆ ಸೇರಿದ್ದೀರಿ’ ಎಂದು. ಅದಕ್ಕೆ ಪಟೇಲರು ‘ಈ ಮೂವರೂ ನನ್ನ ಗುಂಪಿನಲ್ಲಿ ಇದ್ದಾರೆ’ ಎಂದಿದ್ದರು. ಅದರಂತೆ ನಾನು ಯಾವ ಗುಂಪಿಗೂ ಸೇರಿಲ್ಲ. ನೀವು (ಪತ್ರಕರ್ತರು) ಸೇರಿದಂತೆ ಎಲ್ಲರೂ ನನ್ನ ಗುಂಪು’ ಎಂದಾಗ ನಗುವ ಸರದಿ ಪತ್ರಕರ್ತರದ್ದು.