‘ಧರ್ಮ, ಜಾತಿ ಹಾಗೂ ಭಾಷೆಗಳ ನಡುವೆ ಪ್ರೀತಿಯನ್ನು ಪಸರಿಸಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು’ ಎಂದು ಹೇಳಿದರು. ಮಡಿಕೇರಿಯ ಸಿಎಸ್ಐ ಶಾಂತಿ ಚರ್ಚ್ನ ಫಾದರ್ ಅಮೃತ್ ರಾಜ್ ಮಾತನಾಡಿ, ‘ಹಲವು ಧರ್ಮಗಳನ್ನು ಹೊಂದಿರುವ ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಧರ್ಮ ಮತ್ತು ಜಾತಿಗಳ ನಡುವೆ ಸ್ವಾರ್ಥ, ಅಹಂ, ಕೀಳರಿಮೆ ಹಾಗೂ ಅಸೂಯೆಯಿಂದ ಒಡಕು ಮೂಡುತ್ತಿದೆ. ಇದೊಂದು ಆತಂಕದ ವಿಚಾರ’ ಎಂದು ಎಚ್ಚರಿಸಿದರು.