ಸಾಗರ: ಇಲ್ಲಿನ ಎಸ್ಪಿಎಂ. ರಸ್ತೆಯಲ್ಲಿರುವ ಜೈನ ಮಂದಿರದ ಸಮೀಪ ಕಲ್ಯಾಣ ಚಾಲುಕ್ಯರ ಕಾಲದ್ದು ಎನ್ನಲಾದ ಪುರಾತನ ಅವಶೇಷಗಳು ಪತ್ತೆಯಾಗಿವೆ.
ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಪುರಾತನ ಕೇಶವ ದೇವಾಲಯದ್ದು ಎನ್ನಲಾಗಿರುವ ಪಾಣಿಪೀಠ, ಜಲಾರಿ, ಗರ್ಭಗೃಹದ ಕಂಬಗಳು, ಗೋಡೆಯ ಕಲ್ಲು, ಚಪ್ಪಡಿ, ತುಳಸಿಕಟ್ಟೆಯ ಅವಶೇಷಗಳು ದೊರಕಿವೆ.
ಇಲ್ಲಿರುವ ದೇವಾಲಯದ ಕೇಶವಮೂರ್ತಿ ವಿಗ್ರಹವನ್ನು ಕಳ್ಳರು ಕಳ್ಳತನ ಮಾಡಲು ಪ್ರಯತ್ನ ನಡೆಸಿದ್ದ ಹಿನ್ನೆಲೆಯಲ್ಲಿ ಅದನ್ನು ಶಿವಮೊಗ್ಗದ ವಸ್ತು ಸಂಗ್ರಹಾಲಯಕ್ಕೆ ಕಳುಹಿಸಿಕೊಡಲಾಗಿದೆ.