ತಾಲ್ಲೂಕಿನ ದುಗ್ಗಸಂದ್ರ, ನಂಗಲಿ, ಬೈರಕೂರು, ಆವಣಿ ಮೊದಲಾದ ಸ್ಥಳಗಳಲ್ಲಿ ಅಕ್ರಮ ಮರಳು ಪಿಲ್ಟರ್ ದಂದೆ ಹೆಚ್ಚಾಗಿ ನಡೆಯುತ್ತಿದ್ದು, ಕೆರೆಗಳನ್ನು ನಾಶಮಾಡಿಸುತ್ತಿರುವ ದಂಧೆಕೋರರಿಗೆ ಕಾನೂನು ರೀತಿ ಶಿಕ್ಷೆ ವಿಧಿಸಬೇಕು. ಟ್ರಾಕ್ಟರ್ ಮುಖಾಂತರ ಮರಳು ಸಾಗಣೆ ಮಾಡಿ, ಲಾರಿಗಳಿಗೆ ಕೊಡುತ್ತಿದ್ದಾರೆ. ಈ ಮೂಲಕ ಅಕ್ರಮ ಮರಳು ದಂಧೆಗೆ ಟ್ರಾಕ್ಟರ್ ಮಾಲೀಕರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.