ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ ತಾಲ್ಲೂಕಿನ ನಾವೂರು: ಗಂಡು ಕರು ಸಾಗಣೆ- ಗುಂಪಿನಿಂದ ಇಬ್ಬರ ಮೇಲೆ‌ ಹಲ್ಲೆ

Last Updated 21 ಡಿಸೆಂಬರ್ 2017, 7:42 IST
ಅಕ್ಷರ ಗಾತ್ರ

ಮಂಗಳೂರು: ಬಂಟ್ವಾಳ ತಾಲ್ಲೂಕಿನ ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ದನದ ಗಂಡು ಕರುವೊಂದನ್ನು ಸರಕು ಸಾಗಣೆ ರಿಕ್ಷಾ ಸಾಗಿಸುತ್ತಿದ್ದ ಇಬ್ಬರ ಮೇಲೆ‌ ಗುಂಪೊಂದು ಮಂಗಳವಾರ ರಾತ್ರಿ ಹಲ್ಲೆ‌ ನಡೆಸಿದೆ.

ಸಮೀಪದ ಕಕ್ಕೆಪದವು ಉಳಿ ನಿವಾಸಿ ಪೂವಪ್ಪ ನಾಯ್ಕ ಮತ್ತು ರಿಕ್ಷಾ ಚಾಲಕ ಸೈಯದ್ ಇಬ್ರಾಹಿಂ ಹಲ್ಲೆಗೊಳಗಾದವರು. ರಿಕ್ಷಾದಲ್ಲಿ ಕರು ಸಾಗಿಸುತ್ತಿರುವುದನ್ನು ಕಂಡ ಸ್ಥಳೀಯ 25 ಕ್ಕೂ ಹೆಚ್ಚು ಮಂದಿಯ ಗುಂಪು ವಾಹನ ತಡೆದು ಹಲ್ಲೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಬ್ಬರ ಮೇಲೆ ಹಲ್ಲೆ ನಡೆಸಿದ ಗುಂಪು ಅವರನ್ನು ಪೊಲೀಸ್ ವಶಕ್ಕೆ ನೀಡಿದೆ. ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡೆಸಿದಾಗ, ಸಾಕುವುದಕ್ಕಾಗಿ ಕರು ಸಾಗಿಸುತ್ತಿದ್ದುದಾಗಿ ಹಲ್ಲೆಗೊಳಗಾದವರು ಹೇಳಿಕೆ ನೀಡಿದ್ದಾರೆ.

ಹಲ್ಲೆಗೊಳಗಾದವರ ದೂರಿನಂತೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT