‘ಈ ಹಿಂದೆ ಸಮೀಪದ ಮಂಚಲಕುಪ್ಪೆಯಲ್ಲಿ ಎಟಿಎಂ ದರೋಡೆ ನಡೆದಿತ್ತು. ಆಗ ಎಟಿಎಂ ಮತ್ತು ಬ್ಯಾಂಕ್ ಗೆ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳಬೇಕು. ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ನೋಟಿಸ್ ನೀಡಲಾಗಿತ್ತು. ಅದನ್ನು ಬ್ಯಾಂಕಿನವರೂ ಸ್ವೀಕರಿಸಿದ್ದರು. ಆದರೆ, ಭದ್ರತಾ ವ್ಯವಸ್ಥೆ ಮಾಡಿರಲಿಲ್ಲ’ ಎಂದು ಕ್ಯಾತ್ಸಂದ್ರ ಠಾಣೆ ಸಬ್ ಇನ್ಸ್ಪೆಕ್ಟರ್ ರಾಜು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.