ಅಲ್ಪಸಂಖ್ಯಾತರಿಗೆ ನೀಡಿದ ಸವಲತ್ತನ್ನು ನಿಲ್ಲಿಸಬೇಕೆಂದು ನಾನು ಹೇಳಿಲ್ಲ. ಅದನ್ನು ಬಹುಸಂಖ್ಯಾತರಿಗೂ ನೀಡಬೇಕು, ಅದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ತರಬೇಕೆಂದೂ ಹೇಳಿದ್ದೇನೆ. ಅಲ್ಪಸಂಖ್ಯಾತರೆಂದರೆ ದಲಿತರು ಮತ್ತು ಹಿಂದುಳಿದವರಲ್ಲ. ಕ್ರೈಸ್ತರು, ಮುಸಲ್ಮಾನರು ಮುಂತಾದವರು. ಅವರಿಗೆ ನೀಡಿದ ಸವಲತ್ತುಗಳು ದಲಿತರು ಹಿಂದುಳಿದವರನ್ನೊಳಗೊಂಡ ಉಳಿದ ಹಿಂದೂಗಳಿಗೂ ದೊರೆಯಲಿ ಎಂದು ನಾನು ಹೇಳಿದ್ದಾಗಿದೆ.