ಪ್ಲಾಸ್ಟಿಕ್ ಕವರುಗಳಿಗೆ ಬೆಂಕಿಹಾಕುತ್ತಿರುವುದರಿಂದ ದುರ್ವಾಸನೆಯ ಜೊತೆಗೆ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಬಹಳಷ್ಟು ಕಡೆಗಳಲ್ಲಿ ಕಸದ ರಾಶಿಗಳಿಂದ ದುರ್ನಾತ ಬೀರುತ್ತಿದೆ. ಕೂಡಲೇ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಪುರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಸ್ಥಳೀಯರಾದ ಸುರೇಶ್, ಅಶೋಕ್ ಕುಮಾರ್, ಪ್ರತಾಪ್ ಒತ್ತಾಯಿಸಿದರು.