ಯಾಕೆ ಹೀಗೆ? ಶೋಧನಾ ಸಮಿತಿಯಿಂದ ಶಿಫಾರಸುಗೊಂಡ ಹೆಸರುಗಳು, ಅದಕ್ಕೂ ಮೊದಲು ಸರ್ಕಾರ ಶಿಫಾರಸು ಮಾಡಿದ ಹೆಸರುಗಳನ್ನು ಸಹ ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಹೀಗಿರುವಾಗ ರಾಜ್ಯಪಾಲರೇ ಮುತುವರ್ಜಿ ವಹಿಸಿ, ಉನ್ನತ ಶಿಕ್ಷಣ ಇಲಾಖೆ, ಶೋಧನಾ ಸಮಿತಿ ಸದಸ್ಯರು ಹಾಗೂ ತಮಗೆ ವಿಶ್ವಾಸವಿರುವ ಕೆಲವರನ್ನು ರಾಜಭವನಕ್ಕೆ ಕರಿಯಿಸಿಕೊಂಡು ಚರ್ಚಿಸಿ, ಒಂದು ಹೆಸರನ್ನು ಅಂತಿಮಗೊಳಿಸುವುದು ಕಷ್ಟವೇ? ಈ ಪ್ರಕ್ರಿಯೆಗೆ ವರ್ಷಗಟ್ಟಲೆ ಸಮಯ ಬೇಕೇ?