ಶುಕ್ರವಾರ ರಾತ್ರಿ ನಗರದ ಸರ್ಕಿಟ್ ಹೌಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲರೂ ಒಟ್ಟಾಗಿ ಒಂದು ಅರ್ಜಿ ಕೊಡುವಂತೆ ಮೊದಲೇ ಹೇಳಿದ್ದೆ. ಆದರೆ, ಮಾತೆ ಮಹಾದೇವಿ, ವಿರಕ್ತ ಮಠಗಳು, ವೀರಶೈವ ಮಠಾಧೀಶರು, ವೀರಶೈವ ಮಹಾಸಭಾ ಹಾಗೂ ಎಸ್.ಎಂ.ಜಾಮದಾರ ಅವರು ಪ್ರತ್ಯೇಕ ಧರ್ಮ ರಚನೆಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಇವೆಲ್ಲವನ್ನೂ ಪರಿಶೀಲಿಸಿ ವರದಿ ನೀಡುವಂತೆ ಹೇಳಿದ್ದೇನೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದರು.