ಅರಸೀಕೆರೆ: ಮಹದಾಯಿ ಕುಡಿಯುವ ನೀರು ಹಂಚಿಕೆ ವಿಷಯದಲ್ಲಿ ಕೇವಲ ಸಭೆ ನಡೆಸುವುದರಿಂದ ಯಾವುದೇ ಪ್ರಯೋಜನವಾಗದು ಎಂದು ಸಂಸದ ಎಚ್.ಡಿ.ದೇವೇಗೌಡ ಶುಕ್ರವಾರ ಹೇಳಿದರು.
ತಾಲ್ಲೂಕಿನ ಮಾಡಾಳು ಕುಮಾರಾಶ್ರಮ ಮಠದ ನೀಲಲೋಚನ ಸ್ವಾಮೀಜಿಯವರ 25ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
’ರಾಜ್ಯಕ್ಕೆ ಎಷ್ಟು ನೀರು ಕೊಡಬೇಕು ಎಂಬುದು ನ್ಯಾಯಮಂಡಳಿ ಎದುರೇ ತೀರ್ಮಾನವಾಗಬೇಕು ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಹೇಳಿದ್ದಾರೆ. ಅದಕ್ಕೆ ನನ್ನ ಸಹಮತವಿದೆ. ನಾವೇ ತೀರ್ಮಾನ ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇದು ಬಗೆಹರಿಯದ ಸಮಸ್ಯೆ’ ಎಂದು ಅಭಿಪ್ರಾಯಪಟ್ಟರು.