‘ಹನುಮಂತಗೌಡ್ರು ಎಂದರೆ ಯಾರೆಂದು ಗೊತ್ತಾ’ ಎಂದು ಸಭಿಕರನ್ನು ಕೇಳಿದರು. ಸಭಿಕರು ‘ಗೊತ್ತು ಬಿಡಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ’ ಎಂದು ಚೀರಿದರು. ಇದರಿಂದ ಉತ್ತೇಜಿತರಾದ ಸವದಿ, ‘ಹನಮಂತಗೌಡ್ರು ಸದನದಲ್ಲಿ ಒಂದು ಮಾತು ಹೇಳಿದ್ದು ಈಗಲೂ ನೆನಪಿದೆ. ರಾಜ್ಯದ ಎಲ್ಲ ಹಳ್ಳಿಗಳ ಹೆಣ್ಣುಮಕ್ಕಳಿಗಾಗಿ ಹೈಟೆಕ್ ಶೌಚಾಲಯ ಕಟ್ಟಿಸ್ತೀನಿ ಎಂದಿದ್ದರು. ಅದು ಅಂತಿಂತ ಶೌಚಾಲಯ ಅಲ್ಲ. ವಿಮಾನದಲ್ಲಿ ಇರುವಂತ ಶೌಚಾಲಯ. ಮೊದಲು ಶವರ್ನಿಂದ ಬಿಸಿನೀರು ಬರುತ್ತದೆ, ನಂತರ ಶಾಂಪೂ ಬರುತ್ತದೆ ಎಂದು ತಾವು ಕಂಡ ಕನಸು ವಿವರಿಸಿದ್ದರು. ಈಗ ಎಲ್ಲಿದೆ ಅಂತಹ ಹೈಟೆಕ್ ಶೌಚಾಲಯ ಎಂದು ಪ್ರಶ್ನಿಸಿದರು. ನಂತರ ತಾವೇ, ಅದನ್ನು ರಾಜ್ಯದಲ್ಲಿ ಎಲ್ಲಿಯೂ ಕಟ್ಟದೇ ಹುಲಕೊಟಿಯ ತಮ್ಮ ಮನೆಯಲ್ಲಿ ನಿರ್ಮಿಸಿದ್ದಾರೆ’ ಎಂದು ಗೇಲಿ ಮಾಡಿದರು.