‘ನೋಡ್ಕೊಂಡು ಹೋಗ್ರಿ‘ (ರೈತ ಕಲ್ಲಪ್ಪನ ಆತ್ಮಹತ್ಯೆ ಕಾದಂಬರಿಯ ರೂಪಾಂತರ), ‘ಭೂಕಂಪ‘, ‘ಇದು ಹಿಂಗ್ಯಾಕ ಆತು‘, ‘ನಮ್ಮದು ನಮಗs ಇರಲಿ ನಿಮ್ಮದು ನಿಮಗs ಇರ್ಲಿ‘, ‘ತಿರುಮಂತ್ರ‘, ‘ಪ್ರಳಯದಾಚೆಗೆ...‘, ‘ಮಂಡೋದರಿ ಕಲ್ಯಾಣಂ‘, ‘ಮಿಯಾಬೀವಿ ರಾಜೀ ಹೊತೋ?‘, ‘ಉದ್ರಿ ಮಾತs ಇಲ್ಲ...‘ ‘ಇಣುಕು– ತುಣುಕು‘ ಎಂಬ ನಾಟಕಗಳನ್ನು ಒಂದೇ ಕೃತಿಯಲ್ಲಿ ನೀಡಲಾಗಿದೆ. ಪಾತ್ರ ಪೋಷಣೆಯ ದೃಷ್ಟಿಯಿಂದಲೂ ಪಾಟೀಲರ ನಾಟಕಗಳು ರಂಗಕಲಾವಿದರಿಗೆ ಅಚ್ಚುಮೆಚ್ಚು. ಧಾರವಾಡದಲ್ಲಿ ಹಲವು ನಾಟಕಗಳು ಪ್ರಯೋಗ ಕಂಡಿವೆ.