ಶಾಂತವೇರಿ ಗೋಪಾಲಗೌಡ, ಕಡಿದಾಳ್ ಮಂಜಪ್ಪ, ಯು.ಆರ್.ಅನಂತಮೂರ್ತಿ, ಹಾ.ಮಾ.ನಾಯಕ ಮುಂತಾದ ಗಣ್ಯರನ್ನು ಸ್ಮರಿಸುವ ಹಾಗೂ ಅವರ ಹೆಸರನ್ನು ಶಾಸ್ವತಗೊಳಿಸುವ ಕೆಲಸ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲಾಗಿದೆ. ಪಕ್ಷಪಾತ ಧೋರಣೆ ಅನುಸರಿಸದೇ ಎಲ್ಲರನ್ನೂ ಸಮನಾಗಿ ಕಾಣುವ ಮನೋಭಾವನೆಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ ಎಂದು ಕಿಮ್ಮನೆ ಹೇಳಿದರು. ವೇದಿಕೆಯಲ್ಲಿ ಸಿಕಾಡ್ ಸಂಸ್ಥೆಯ ಕಿರಣ್ ಮಹೇಂದ್ರಕರ್, ರವಿ, ಪ್ರಮೋದ್ ಕೊಟಗಿ, ಎಸ್.ಆರ್.ದೇಸಾಯಿ ಉಪಸ್ಥಿತರಿದ್ದರು.