ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರ ಹಿತ ಕಾಪಾಡಲು ಸರ್ಕಾರಗಳು ವಿಫಲ’

Last Updated 24 ಡಿಸೆಂಬರ್ 2017, 6:17 IST
ಅಕ್ಷರ ಗಾತ್ರ

ಆಳಂದ: ‘ಭಾರತ ಕೃಷಿ ಪ್ರಧಾನ ದೇಶ. ವೈವಿಧ್ಯಮಯ ಕೃಷಿ ಚಟುವಟಿಕೆಗಳು ಕೈಗೊಳ್ಳಲು ಅನುಕೂಲಕರ ನೈಸರ್ಗಿಕ ಸಂಪತ್ತು ಲಭ್ಯವಾದರೂ ರೈತರ ಹಿತ ಕಾಪಾಡಲು ನಮ್ಮ ಸರ್ಕಾರಗಳ ನೀತಿ ವಿಫಲವಾಗಿವೆ’ ಎಂದು ರೈತ ಮುಖಂಡ ಮೌಲಾ ಮುಲ್ಲಾ ಕಳವಳ ವ್ಯಕ್ತಪಡಿಸಿದರು.

ನೇಕಾರ ಕಾಲೋನಿಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ ನಿವಾಸದಲ್ಲಿ ಕಾಂಗ್ರೆಸ್‌ ಕಿಸಾನ ಘಟಕ ಮತ್ತು ಅಖಿಲ ಭಾರತ ಕಿಸಾನ ಸಭಾ ಸಹಯೋಗದಲ್ಲಿ ಶನಿವಾರ ‘ರೈತ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎರಡು ದಶಕಗಳಿಂದ ರೈತರಿಗೆ ಸಂಕಷ್ಟ ಹೆಚ್ಚುತ್ತಿದೆ, ಉದಾರೀಕರಣ ನೀತಿಯಿಂದ ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲವಾಗಿದೆ. ಸರ್ಕಾರವು ನೀರಿನ ಸಂಗ್ರಹ, ಮಣ್ಣಿನ ಸಂರಕ್ಷಣೆಗೆ ಹಾಕಿಕೊಂಡ ಯೋಜನೆಗಳು ಸದ್ಬಳಕೆ ಯಾಗುತ್ತಿಲ್ಲ’ ಎಂದು ಆರೋಪಿಸಿದರು.

ಕಾಂಗ್ರೆಸ್ ಕಿಸಾನ ಘಟಕದ ರಾಜ್ಯ ಕಾರ್ಯದರ್ಶಿ ರಮೇಶ ಲೋಹಾರ ರೈತ ಮುಖಂಡರಾದ ಪ್ರಕಾಶ ಜಾನೆ, ಸಲಾಂ ಸಗರಿ, ಸುಭಾಷ ಪೌಜಿ, ಕಲ್ಯಾಣಿ ತುಕಾಣೆ, ರಾಜಶೇಖರ ಶಿವಮೂರ್ತಿ ಕಿಸಾನ ಘಟಕದ ಜಿಲ್ಲಾಧ್ಯಕ್ಷ ಸುಭಾಷ ಪಂಚಾಳ ಪುರಸಭೆ ಉಪಾಧ್ಯಕ್ಷ ಅಜಗರಲಿ ಹವಾಲ್ದಾರ್, ಸದಸ್ಯರಾದ ಲಿಂಗರಾಜ ಪಾಟೀಲ, ವಹೀದ್ ಜರ್ಧಿ, ವ್ಯವಸಾಯ ಸಂಘದ ಅಧ್ಯಕ್ಷ ಶಂಕರರಾವ ಹತ್ತಿ, ಜಿಪಂ ಮಾಜಿ ಸದಸ್ಯೆ ಪೂಜಾ ಲೋಹಾರ, ಕಬೀರಾ ಬೇಗಂ, ಶೋಭಾ ಹತ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT