ಬಾಗಲಕೋಟೆ: ಮೊದಲ ದಿನ ಜನರಿಲ್ಲದೇ ಬಣಗುಟ್ಟಿದ್ದ ತೋಟಗಾರಿಕೆ ಮೇಳಕ್ಕೆ ಎರಡನೇ ದಿನವಾದ ಶನಿವಾರ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯರು ದಾಂಗುಡಿ ಇಟ್ಟರು. ಇದರಿಂದ ಮೇಳ ಜನರಿಂದ ತುಂಬಿ ತೋಟಗಾರಿಕೆ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಹಬ್ಬದ ಕಳೆ ಕಾಣಿಸಿತು. ವಾರಾಂತ್ಯ ಮಧ್ಯಾಹ್ನದ ನಂತರ ಜನರ ಪ್ರವಾಹ ಹೆಚ್ಚಳವಾಯಿತು. ಮೊದಲ ದಿನ ವ್ಯಾಪಾರವಿಲ್ಲದೇ ಮಂಕಾಗಿದ್ದ ಆಹಾರ ಮೇಳದ ಮಳಿಗೆಗಳಲ್ಲಿ ಗೆಲುವು ಕಾಣಿಸಿಕೊಂಡಿತು.