ವಿಶ್ವ ಭಾರತಿಯ ಆಚಾರ್ಯರೂ ಆದ ಶ್ರೀಮತಿ ಗಾಂಧಿಯವರು ಇಂದು ಬೆಳಿಗ್ಗೆ ಇಲ್ಲಿ ಮಾವಿನ ತೋಪಿನಲ್ಲಿ ಅದರ ಘಟಿಕೋತ್ಸವದ ಅಧ್ಯಕ್ಷ ಭಾಷಣ ಮಾಡುತ್ತಾ, ‘ನಾವು ಸ್ವಾತಂತ್ರ್ಯದ ಮೂರನೇ ದಶಕದಲ್ಲಿ ಅಡಿಯಿಡುತ್ತಿರುವಾಗ ಪ್ರಜಾಪ್ರಭುತ್ವ ಕುರಿತು ಅತಿಸರಳ ಅಭಿಪ್ರಾಯಗಳು ಪ್ರಚಲಿತಗೊಳ್ಳತೊಡಗಿವೆ. ಜನರು ಮಾಡಿದ್ದೆಲ್ಲಾ ಸರಿ ಎಂಬುದೊಂದು ಭಾವನೆಯೂ ಇದೆ. ಪ್ರತಿಯೊಂದು ಪ್ರಜಾತಂತ್ರವೂ ತನ್ನ ತನ್ನ ಸಂಪ್ರದಾಯವನ್ನು ರೂಪಿಸಿಕೊಳ್ಳುತ್ತದೆ. ನೀರೊಂದೇ ಅಲ್ಲ, ದಂಡೆಯೂ ಸೇರಿದರೆ ಮಾತ್ರವೇ ನದಿಯಾಗುವುದು’ ಎಂದರು.