ಕುದ್ರೋಳಿ ಬೆಂಗರೆಯ ಶ್ರೀ ಕೋಟೆದ ಬಬ್ಬು ದೈವಸ್ಥಾನದ ಜೀರ್ಣೋದ್ದಾರ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳ್ಳಬೇಕು ಎಂದು ಶಾಸಕರು ಹೇಳಿದರು. ದೈವಸ್ಥಾನಕ್ಕೆ ಭೇಟಿ ಕೊಟ್ಟು ಜೀರ್ಣೋದ್ಧಾರ ಕಾಮಗಾರಿಗೆ ₹ 10 ಲಕ್ಷ ಮಂಜೂರು ಮಾಡಲಾಗಿದೆ ಎಂದರು. ಆಸೀಫ್, ಅಸ್ಲಾಂ, ಸುಮನ್, ವಿಕ್ರಾಂತ, ವಸಂತ್, ಶೈಲೇಶ್, ವಿನೋದ್ ಹಾಗೂ ವಿಜಯ್ ಇದ್ದರು.