‘ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ರಸ್ತೆ ಮತ್ತು ನೀರಾವರಿ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಅನುದಾನವೂ ಬಿಡುಗಡೆ ಆಗಿತ್ತು. ಅದನ್ನೇ ಶಾಸಕ ಶ್ರೀನಿವಾಸ್ ತಮ್ಮ ಸಾಧನೆ ಎಂದು ಬಿಂಬಿಸುತ್ತಿದ್ದಾರೆ’ ಎಂದು ಕೆಲವರು ಆರೋಪಿಸಿದ್ದಾರೆ. ಆದರೆ ನಾನು ಅಧಿಕಾರಕ್ಕೆ ಬಂದ ಮೇಲೆ ಯಾವ ನೀರಾವರಿ ಕಾಮಗಾರಿಗೆ ಕ್ಯಾಬಿನೇಟ್ ಅನುಮೋದನೆ ನೀಡಿದೆ, ಯಾವಾಗ ನೀಡಿದೆ, ಯಾವಾಗ ಬೋರ್ಡ್ ಕಂಟ್ರೋಲ್ ಅಂಕಿತ ನೀಡಿದೆ, ಯಾವಾಗ ಟೆಂಡರ್ ಆಗಿದೆ ಎಂಬುದನ್ನು ಆಧಾರ ಸಹಿತವಾಗಿ ನಿರೂಪಿಸುವುದಾಗಿ’ ತಿಳಿಸಿದರು.