ಮಳಲಿ ಗ್ರಾಮದ ಧರ್ಮೇಗೌಡ ಅವರು ಭತ್ತದ ಬೆಳೆ ಕೊಯ್ಲು ಮಾಡಿ ಕಣದಲ್ಲಿ ಗುಡ್ಡೆ ಮಾಡಿದ್ದರು. ರಾತ್ರಿ ಕಾಡಾನೆಗಳು ನುಗ್ಗಿ ಈ ಬೆಳೆಯನ್ನು ಚೆಲ್ಲಾಡಿ, ಹಾಳು ಮಾಡಿವೆ. ಸತ್ತಿಗಾಲ್ ಗ್ರಾಮದಲ್ಲಿ ಮಹಮ್ಮದ್ ಅಬ್ಬಾಸ್, ಅಬ್ದುಲ್ ಮಜೀದ್ ಇವರು ಒಕ್ಕಣೆ ಮಾಡಿ ಚೀಲದಲ್ಲಿ ತುಂಬಿಸಿ ದಾಸ್ತಾನು ಮಾಡಿದ್ದ ಸುಮಾರು 4 ಚೀಲ ಭತ್ತವನ್ನು ತಿಂದು ಸುತ್ತಲೂ ಎರಚಿ ಭಾರಿ ನಷ್ಟ ಉಂಟು ಮಾಡಿವೆ. ಇದೇ ಗ್ರಾಮದ ರವಿ ಅವರ ತೋಟದಲ್ಲಿ ಅಡಿಕೆ, ಕಾಫಿ ಗಿಡಗಳನ್ನು ನಾಶ ಮಾಡಿವೆ.