ಚಿಕ್ಕಮಗಳೂರು: ‘ಸಂವಿಧಾನ ಬದಲಾವಣೆ ಮಾಡುವ ಚರ್ಚೆ ಬಿಜೆಪಿಯಲ್ಲಾಗಲಿ, ಕೇಂದ್ರ ಸರ್ಕಾರದ ಮುಂದಾಗಲಿ ಇಲ್ಲ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ‘ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರ ಹೇಳಿಕೆಗಳನ್ನು ಕೇಂದ್ರ ನಾಯಕರು ಗಮನಿಸುತ್ತಿದ್ದಾರೆ. ಸಂವಿಧಾನವು ಅಂಬೇಡ್ಕರ್ ಅವರ ಕೊಡುಗೆ. ಅವರು ನೀಡಿದ ಸಂವಿಧಾನದಿಂದಾಗಿ ನಮಗೆಲ್ಲ ಧ್ವನಿ ಬಂದಿದೆ’ ಎಂದು ಉತ್ತರಿಸಿದರು.