ಕರ್ನಾಟಕದಲ್ಲಿ ಅತಿ ದೊಡ್ಡದಾದ ಬೆಳಗಾವಿ ಜಿಲ್ಲೆಯನ್ನು ಮೂರು ಭಾಗಗಳಾಗಿ ವಿಭಜಿಸಲು ತೀವ್ರ ಒತ್ತಡ ಪ್ರಾರಂಭವಾಗಿದೆ. ಈ ವಿಚಾರವನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ವಿಭಜನೆಗೆ ಕೈಹಾಕುವುದಕ್ಕಿಂತ ಮೊದಲು ವಿಭಜನೆಯಿಂದ ಆಗುವ ಇತರ ಸಮಸ್ಯೆಗಳತ್ತ ಗಮನಹರಿಸಬೇಕು. ಭಾಷಾ ದೃಷ್ಟಿಯಿಂದ ಬೆಳಗಾವಿಯು ಅತಿ ಸೂಕ್ಷ್ಮ ಪ್ರದೇಶವಾಗಿದೆ. ಬೆಳಗಾವಿ ಗಡಿ ಸಮಸ್ಯೆಯು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯ ಹಂತದಲ್ಲಿದೆ. ಶತಾಯ ಗತಾಯ ಹೇಗಾದರೂ ಮಾಡಿ ಬೆಳಗಾವಿಯನ್ನು ಕಬಳಿಸಲು ಮಹಾರಾಷ್ಟ್ರ ಕಾಯುತ್ತಿದೆ.