‘ಈ ಹಣದಲ್ಲಿ 3 ಶಸ್ತ್ರಾಗಾರ (ಮದ್ದಿನ ಮನೆ)ಗಳು ಹಾಗೂ ಕೋಟೆ ಮತ್ತು ಬುರುಜು ಸೇರಿ ಸ್ವಲ್ಪ ಭಾಗವನ್ನು ಮಾತ್ರ ದುರಸ್ತಿ ಮಾಡಲಾಗುವುದು. ಇನ್ನುಳಿದ ಕೋಟೆ ಮತ್ತು ಕಂದಕದಲ್ಲಿ ಬೆಳೆದಿರುವ ಕಳೆ ಗಿಡ ತೆಗೆದು ಹಸನುಗೊಳಿಸುವ ಕಾರ್ಯ ಸದ್ಯ ನಡೆಯದು’ ಎಂದು ರಾಜ್ಯ ಪ್ರಾಚ್ಯವಸ್ತು ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೋಹನಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.