ಸೇವೆಯಲ್ಲಿರುವಾಗಲೇ 1992 ರಲ್ಲಿ ಕುಮಟಾದಲ್ಲಿ ‘ಜನ ಜಾಗೃತಿ ವೇದಿಕೆ’ ಹುಟ್ಟು ಹಾಕಿ ಕುಡಿಯುವ ನೀರು ಸಮಸ್ಯೆ ನಿವಾರಣೆ, ಕುಮಟಾಕ್ಕೆ ಹೊಸ ಸರ್ಕಾರಿ ಆಸ್ಪತ್ರೆ ಆಗುವ ಬಗ್ಗೆ ದನಿ ಎತ್ತಿದ್ದರು. ಅಳ್ವೆಕೋಡಿಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣದ ಸೌಲಭ್ಯ ದೊರಕಿಸಿಕೊಡುವ ಉದ್ದೇಶದಿಂದ ಸಮಾನ ಮನಸ್ಕರೊಂದಿಗೆ ಸೇರಿ ‘ಅಕ್ಷಯ ಶಿಕ್ಷಣ ಸಂಸ್ಥೆ’ ಅಡಿಯಲ್ಲಿ ಅಕ್ಷಯ ಪ್ರೌಢಶಾಲೆ ಆರಂಭಕ್ಕೂ ಕಾರಣ ಕರ್ತರಾಗಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಹಿಂದಿನಿಂದಲೂ ಸಂಪರ್ಕ ಹೊಂದಿದ್ದಾರೆ.