ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಠ ಕಲಿಯಬೇಕು

Last Updated 27 ಡಿಸೆಂಬರ್ 2017, 20:21 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಮೂರು ದಿನಗಳಲ್ಲಿ ಎರಡು ದೇವಾಲಯ, ಒಂದು ದರ್ಗಾಕ್ಕೆ ಭೇಟಿ ನೀಡಿದ್ದು ವರದಿಯಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಗುಜರಾತ್‌ನಲ್ಲಿ ಚುನಾವಣೆಗೂ ಮುನ್ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದರ ಅನುಸರಣೆ ಇದಾಗಿರಬೇಕು! ಆದರೆ ಈ ಬೆಳವಣಿಗೆ, ಸಾಮಾಜಿಕ ಆರೋಗ್ಯಕ್ಕೆ ಒಳ್ಳೆಯದೆನಿಸುವುದಿಲ್ಲ.

ಅಲ್ಪಸಂಖ್ಯಾತರ ಮುದ್ದಿಗಾಗಿ, ಮಸೀದಿ, ಚರ್ಚ್‌ಗಳ ಭೇಟಿ, ಇಫ್ತಾರ್ ಕೂಟಗಳೇನೋ ಕಾಂಗ್ರೆಸ್ ಸಂಪ್ರದಾಯವೇ, ಆದರೆ ಆ ಮಂತ್ರ (ತಂತ್ರ?), ಹಿಂದುತ್ವದ ವಿಚಾರದಲ್ಲಿ ಪ್ರಯೋಜನಕ್ಕೆ ಬರುವಂಥದ್ದಲ್ಲ. ಬದಲಿಗೆ ಅನಾಹುತಕಾರಿಯೇ ಆದೀತು. ‘ಹಿಂದುತ್ವ’ವೆನ್ನುವುದು ಎಂದಿಗೂ ಖಂಡ- ತುಂಡವೇ ಹೊರತು ಅಖಂಡವಲ್ಲ. ಜಾತಿ ಆಂದೋಲನಗಳು ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಸಹ ಆ ಜಾಡನ್ನು ಅನುಸರಿಸಹೋಗುವುದು ವಿವೇಕವಲ್ಲ. ಬದಲಿಗೆ, ಹುಸಿತನವನ್ನು ಎತ್ತಿತೋರಿಸುವ ಅವಕಾಶವಾಗಿ ಇದನ್ನು ಬಳಸಿಕೊಂಡರೆ, ಪಕ್ಷಕ್ಕೆ ಒಳಿತಾಗುತ್ತದೆ.

–ಆರ್. ಕೆ. ದಿವಾಕರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT