ಅಲ್ಪಸಂಖ್ಯಾತರ ಮುದ್ದಿಗಾಗಿ, ಮಸೀದಿ, ಚರ್ಚ್ಗಳ ಭೇಟಿ, ಇಫ್ತಾರ್ ಕೂಟಗಳೇನೋ ಕಾಂಗ್ರೆಸ್ ಸಂಪ್ರದಾಯವೇ, ಆದರೆ ಆ ಮಂತ್ರ (ತಂತ್ರ?), ಹಿಂದುತ್ವದ ವಿಚಾರದಲ್ಲಿ ಪ್ರಯೋಜನಕ್ಕೆ ಬರುವಂಥದ್ದಲ್ಲ. ಬದಲಿಗೆ ಅನಾಹುತಕಾರಿಯೇ ಆದೀತು. ‘ಹಿಂದುತ್ವ’ವೆನ್ನುವುದು ಎಂದಿಗೂ ಖಂಡ- ತುಂಡವೇ ಹೊರತು ಅಖಂಡವಲ್ಲ. ಜಾತಿ ಆಂದೋಲನಗಳು ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಸಹ ಆ ಜಾಡನ್ನು ಅನುಸರಿಸಹೋಗುವುದು ವಿವೇಕವಲ್ಲ. ಬದಲಿಗೆ, ಹುಸಿತನವನ್ನು ಎತ್ತಿತೋರಿಸುವ ಅವಕಾಶವಾಗಿ ಇದನ್ನು ಬಳಸಿಕೊಂಡರೆ, ಪಕ್ಷಕ್ಕೆ ಒಳಿತಾಗುತ್ತದೆ.