‘ಹೊಳೆನರಸೀಪುರ ತಾಲ್ಲೂಕು ಹಂಗರಹಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದರೂ ಶಾಸಕ ರೇವಣ್ಣ, ಹಾಸನ ರೈಲ್ವೆ ಮೇಲ್ಸೇತುವೆ ಬಗ್ಗೆ ಇದುವರೆಗೂ ಮಾತನಾಡಿರಲಿಲ್ಲ. ಅವರು ಎಲ್ಲ ಕಡೆಯೂ ಜನರಿಗೆ ತೊಂದರೆ ನೀಡುವ ಕೆಲಸಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಸದಾನಂದ ಗೌಡರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಒತ್ತಡ ಹೇರಿ ಹಂಗರಹಳ್ಳಿಗೆ ರೈಲ್ವೆ ಮೇಲ್ಸೇತುವೆ ಮಾಡಿಸಿರುವ ಇವರು ಹಾಸನದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಟೀಕಿಸಿದರು.