ಸತಮ್ಮನ ದೇವಸ್ಥಾನ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ. ಪಟ್ಟಣದ ಹೂಗಾರ ಮನೆತನದವರು ಗುತ್ತಿಗೆದಾರರಾಗಿದ್ದು, ಒಟ್ಟು ಐದು ಬಾರಿ ಬಾವಿಯನ್ನು ಸ್ವಚ್ಛಗೊಳಿಸಿದ್ದಾರೆ. 2016ರಲ್ಲಿ ಜಿಲ್ಲಾಡಳಿತ ಸ್ವಚ್ಛತೆಗೆ ಮುಂದಾಗಿತ್ತು. ಆದರೆ, ಗುತ್ತಿಗೆ ಪಡೆದವರು ಈ ಕಾರ್ಯ ಮಾಡಲು ಆಗಿರಲಿಲ್ಲ. ಮತ್ತೆ ದೇವಸ್ಥಾನದವರೇ ಸ್ವಚ್ಛಗೊಳಿಸಿದ್ದರು.