ಸಲೀಂ ಸಂಗನಮುಲ್ಲ ಮಾತನಾಡಿ, ‘ವಿವಾದವನ್ನು ಜೀವಂತವಾಗಿಟ್ಟು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬದಲು, ವಿವಾದ ಬಗೆಹರಿಸಿ ನಾವೇ ಮಾಡಿದ್ದೆಂದು ಹೇಳಿಕೊಳ್ಳಲಿ. ಅದನ್ನು ಬಿಟ್ಟು, ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಬರೆದ ಪತ್ರವನ್ನು ಸಭೆಗೆ ಓದಿದರೆ ಪ್ರಯೋಜನ ಏನು? ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಆರೋಪಿಸಿದರು. ಧರಣಿ ಸಂದರ್ಭದಲ್ಲಿ ಬಿಜೆಪಿ ಕಚೇರಿಯಲ್ಲಿ ಯಾರೂ ಇರಲಿಲ್ಲ.