ಬಸವಣ್ಣನಂತೂ, ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂದಿದ್ದಾರೆ. ‘ಅರಿವಿಂಗೆ ಹಿರಿದು ಕಿರಿದುಂಟೇ?’ ಎನ್ನುತ್ತಾರೆ ಚನ್ನಬಸವಣ್ಣ, ಸಿದ್ದರಾಮ ಮುಂತಾದ ಶರಣರು. ‘ಪ್ರಾಯಂ ಕೂಸಾದಡೆ ಅಭಿಪ್ರಾಯಂ ಕೂಸಕ್ಕುಮೇ?, ಅಬ್ಧಿಗೆ ಮಿತಿಯುಂಟು, ಬುದ್ಧಿಗೆ ಮಿತಿಯಿಲ್ಲ’ ಎಂದೆಲ್ಲ ತಿಳಿದವರು ಹೇಳುತ್ತಾರೆ.