ರತ್ನಾಕರ ಶೆಟ್ಟಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ. ಇಬ್ರಾಹಿಂ ಖಲೀಲ್ ಕಲ್ಲಡ್ಕದಲ್ಲಿ ಒಂದು ಗುಂಪಿನ ನಾಯಕನಂತೆ ಗುರುತಿಸಿಕೊಂಡಿದ್ದ. ಇಬ್ಬರೂ ಬಂಟ್ವಾಳ ನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದರು. ಪೊಲೀಸ್ ಇಲಾಖೆಯ ಅರ್ಜಿ ಆಧರಿಸಿ ವಿಚಾರಣೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಇಬ್ಬರನ್ನೂ ಗಡೀಪಾರು ಮಾಡಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.