‘ಅರಣ್ಯ ಭೂಮಿಗಳನ್ನು ಅತಿಕ್ರಮಣ ಮಾಡಿದ್ದು ಕೃಷಿಗಾಗಿ. ಅದರ ಮೇಲೆಯ ಎಲ್ಲರೂ ಅವಲಂಬಿತರಾಗಿದ್ದಾರೆ. ಈ ಜಮೀನುಗಳನ್ನು ವಶಪಡಿಸಿಕೊಂಡರೆ ರೈತರ ಬದುಕು ದುಸ್ತರವಾಗಲಿದೆ. ಹಳಿಯಾಳದಲ್ಲಿ ಅರಣ್ಯ ಭೂಮಿ ಅತಿಕ್ರಮಿಸಿಕೊಂಡ ಕೆಲ ರೈತರ ಜಮೀನುಗಳನ್ನು ಜಿ.ಪಿ.ಎಸ್ ಸರ್ವೆ ಮಾಡಿಲ್ಲ. ಅದನ್ನು ಶೀಘ್ರ ಪೂರ್ಣಗೊಳಿಸಿ, ಅವರಿಗೂ ಪಟ್ಟಾವನ್ನು ಮಂಜೂರು ಮಾಡಿಸಬೇಕು. ನೀಡಿರುವ ದಾಖಲೆಗಳ ಆಧಾರದ ಮೇಲೆ ಹಾಗೂ ಸಾಗುವಳಿ ಮಾಡಿದ ಬಗ್ಗೆ ವಹಿವಾಟನ್ನು ಪರಿಶೀಲಿಸಿ ಜಮೀನುಗಳನ್ನು ಮಂಜೂರಿಸಿ, ಪಟ್ಟಾ ಒದಗಿಸಿಕೊಡಬೇಕು’ ಎಂದು ಒತ್ತಾಯಿಸಿದರು.