ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವನ ಕಾಫಿ ಸವಿದ ತೆಲುಗು ನಟ ಶ್ರೀಕಾಂತ

Last Updated 31 ಡಿಸೆಂಬರ್ 2017, 10:00 IST
ಅಕ್ಷರ ಗಾತ್ರ

ಧಾರವಾಡ: ‘ಚಕ್ಕೋತಾ ಚಕ್ಕೋತಾ...’ ಎಂಬ ಯಾರೇ ನೀನು ಚೆಲುವೆ ಚಿತ್ರದ ಗೀತೆಯಲ್ಲಿ ನರ್ತಿಸಿದ್ದ ಕನ್ನಡ ಮೂಲದ ತೆಲುಗು ನಟ ಮಕ್ಕಾ ಶ್ರೀಕಾಂತ ಶನಿವಾರ ಧಾರವಾಡಕ್ಕೆ ಭೇಟಿ ನೀಡಿ, ಉಪವನ ಹೋಟೆಲಿನಲ್ಲಿ ಉಪಾಹಾರ ಸೇವಿಸಿದರು.

ಕುಟುಂಬ ಸಮೇತರಾಗಿ ದಾಂಡೇಲಿಗೆ ಪ್ರಯಾಣಿಸುತ್ತಿದ್ದ ಅವರು ಮಾರ್ಗ ಮಧ್ಯದಲ್ಲಿ ತಮ್ಮ ಸ್ನೇಹಿತರಾದ ಉಪವನ ಹೋಟೆಲ್ ಮಾಲೀಕ ದಿನೇಶ ಶೆಟ್ಟಿ ಅವರನ್ನು ಭೇಟಿಯಾಗಿ ಅಲ್ಲಿ ತಿಂಡಿ ಸವಿದರು.

ಈ ಕುರಿತಂತೆ ಪ್ರತಿಕ್ರಿಯಿಸಿದ ದಿನೇಶ, ‘ಗಂಗಾವತಿ ಮೂಲದವರಾದ ಶ್ರೀಕಾಂತ ನನ್ನ ಬಾಲ್ಯ ಸ್ನೇಹಿತ. ಒಂದೇ ಕಾಲೇಜಿನಲ್ಲಿ ಜತೆಗೆ ಓದಿದ್ದೆವು. ಬಹಳ ವರ್ಷಗಳ ನಂತರ ಭೇಟಿಯಾಗಿದ್ದೆವು’ ಎಂದರು.

ಹೇಂಡ್ತಿ ಹೇಳಿದರೆ ಕೇಳಬೇಕು, ಉಗಾದಿ, ಶಿವರಾಜಕುಮಾರ್ ಹಾಗೂ ಸುದೀಪ್ ನಟನೆಯ ದಿ ವಿಲನ್‌ ಚಿತ್ರದಲ್ಲೂ ಶ್ರೀಕಾಂತ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT