ಅಂಬೇಡ್ಕರ್ ಭವನದ ಎದುರಿನ ಹಳೇಕುರುಬರ ಬೀದಿಯಲ್ಲಿರುವ ಟವರ್ ಏರಿದ ಹನುಮಂತ, ‘ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಮಹೇಶ್ ಅವರನ್ನು ನೋಡಬೇಕು. ಅವರನ್ನು ಕರೆಯಿಸಿ. ಇಲ್ಲದಿದ್ದರೆ ಸಾಯುತ್ತೇನೆ’ ಎಂದು ಬೆದರಿಕೆ ಒಡ್ಡಿದ. ಮಹೇಶ್ ಸ್ಥಳಕ್ಕೆ ಬಂದ ಬಳಿಕ ಕೆಳಕ್ಕಿಳಿದ. ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದರು.